Skip to main content

SIR ENUMERATION FORM FILLING DETAILS IN KANNADA

 ಎಸ್ಐಆರ್ SIR ಫಾರ್ಮ್ ಎಂದರೇನು



 ಒಬ್ಬ ಸಾಮಾನ್ಯ ವ್ಯಕ್ತಿಗೆ ಸರಳವಾಗಿ ತಿಳಿಯುವ ಹಾಗೆ ಇಲ್ಲಿ ಮಾಹಿತಿ ನೀಡಿದೆ


 @@ಮುಂಜಾಗ್ರತೆಗಳು@@

💥ಯಾರು ಕೂಡ ಅವಸರ ಪಡಬೇಡಿ

💥 ಭಯಬೇಡ

 💥ಅವಸರದಿಂದ ಫಾರ್ಮ್ ಅನ್ನು ಭರ್ತಿ ಮಾಡಬೇಡಿ

💥 ಎಲ್ಲದಕ್ಕೂ ಸೂಕ್ತವಾದ ಕಾಲಾವಕಾಶವಿದೆ


 @ತಿಳಿಯಬೇಕಾದ ಮುಖ್ಯವಾದ ಮಾಹಿತಿಗಳು@

 2002ರಲ್ಲಿ ಯಾರೆಲ್ಲಾ ಓಟನ್ನು ಹಾಕಿದ್ದೀರಾ ಅವರು ಫಾರ್ಮಿನ ಎಡ ಭಾಗವನ್ನು ಭರ್ತಿ ಮಾಡಬೇಕು

 ಮೊದಲು ನೀವು 2002ರಲ್ಲಿ ಎಲ್ಲಿ ವೋಟನ್ನು ಹಾಕಿದ್ದೀರಾ ಅನ್ನೋ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ತಿಳಿದ ಮೇಲೆ ನಿಮ್ಮ ಆ ಕ್ಷೇತ್ರದಲ್ಲಿ ಯಾವ ಅಂಗನವಾಡಿ ಕೇಂದ್ರವಿದೆ ಅಲ್ಲಿ ಹೋಗಿ 2002ರಲ್ಲಿ ವೋಟ್ ಹಾಕಿದ್ದ ಲಿಸ್ಟನ್ನು ಪಡೆದುಕೊಳ್ಳಿ

 ಅದರಲ್ಲಿ ನೀವು ಎಲ್ಲಿ ವೋಟನ್ನು ಹಾಕಿದ್ದೀರಾ ಯಾವ ಜಾಗದಲ್ಲಿ ಹಾಕಿದ್ದೀರಾ ಯಾವ ಒಂದು ಕ್ರಮ ಸಂಖ್ಯೆಯಲ್ಲಿ ಹಾಕಿದ್ದೀರಾ ಎಷ್ಟನೇ ಬೂತಿನಲ್ಲಿ ಹಾಕಿದ್ದೀರಾ ಯಾವ ಕ್ಷೇತ್ರಕ್ಕೆ ಹಾಕಿದ್ದೀರಾ ಅನ್ನೋದು ಕೂಲಂಕುಶವಾಗಿ ಅಲ್ಲಿ ಸಿಗುತ್ತೆ.

 ಇನ್ನೊಂದು ಮುಖ್ಯವಾದದ್ದು ನೀವು ಪಡೆದುಕೊಂಡ ಲಿಸ್ಟ್ ನಲ್ಲಿ ಸರಿ ಇದೆಯೋ ಅಥವಾ ತಪ್ಪಿದೆ ಎಂದು ತಿಳಿದುಕೊಳ್ಳಲು ಹತ್ತಿರದ

 ಸೈಬರ್ ಗೆ ಭೇಟಿ ನೀಡಿ ನೀವು ಈ ಲಿಸ್ಟ್ ಅನ್ನು ಅಲ್ಲಿ 

 ಪರೀಕ್ಷಿಲಿಸಿ ಸರಿ ಇದ್ದರೆ ತೊಂದರೆ ಇಲ್ಲ ತಪ್ಪಾಗಿ ಮಾಹಿತಿ ಇದ್ದರೆ ನೀವು ಅಂಗನವಾಡಿ ಸಿಬ್ಬಂದಿ ಬಲಿ ಅಂದರೆ ನಿಮಗೆ ಯಾರು ಆ ಲಿಸ್ಟ್ ನೀಡಿರುತ್ತಾರೋ ಅವರ ಬಳಿ ನಿಮ್ಮ ಮಾಹಿತಿಯಲ್ಲಿ ವ್ಯತ್ಯಾಸ ಇರುವುದನ್ನು ಹೇಳಿ..

  2002ರಲ್ಲಿ ವೋಟ್ ಹಾಕಿದ ವ್ಯಕ್ತಿಗಳು ಎಡಭಾಗವನ್ನು ಭರ್ತಿ ಮಾಡುವಾಗ ನಿಮ್ಮ ಕೈಯಲ್ಲಿರುವ ಯಾವ ಪ್ರತಿ ಲಿಸ್ಟಿರುತ್ತೋ ಅದೇ ರೀತಿಯಾಗಿ ಭರ್ತಿ ಮಾಡಿ ಅದರಲ್ಲಿ ನಿಮ್ಮ ಒಂದು ಸಂಬಂಧಿಕರ ಹೆಸರನ್ನು ಸೂಚಿಸುವಂತೆ ಹೇಳುತ್ತದೆ ಅಂದರೆ ಅಲ್ಲಿ ನೀವು ನಿಮ್ಮ ತಂದೆ ಅಥವಾ ತಾಯಿಯ ಹೆಸರು ಹಾಕಿ ತಂದೆ ಅಥವಾ ತಾಯಿಯ ಹೆಸರು ಹಾಕುವ ಮುನ್ನ ಇಬ್ಬರಲ್ಲಿ ಯಾರ ಡಾಕ್ಯುಮೆಂಟ್ ಎಲ್ಲವೂ ಸರಿಯಾಗಿದೆ ಅವರ ಹೆಸರನ್ನು ಹಾಕಿ

 ಯಾಕಂದರೆ ಮುಂದೆ ನಿಮಗೆ ಯಾವುದೇ ರೀತಿಯ ತೊಂದರೆ ಆಗಬಾರದು..


 ಇನ್ನು 2002ರಲ್ಲಿ ಯಾರೆಲ್ಲ ವೋಟನ್ನು ಹಾಕಲಿಲ್ಲ ಅಂದರೆ ಎರಡರ ನಂತರ ವೋಟ್ ಹಾಕುತ್ತಿರುವವರು ಫಾರ್ಮಿನ ಬಲಭಾಗವನ್ನು ಭರ್ತಿ ಮಾಡಬೇಕು ಇದರಲ್ಲಿ ಕೂಡ ನಿಮ್ಮ ಸಂಬಂಧಿಕರ ಹೆಸರನ್ನು ಸೂಚಿಸುವಾಗ ತಂದೆ ಅಥವಾ ತಾಯಿಯ ಹೆಸರನ್ನು ಸೂಚಿಸಿ

 ಇಲ್ಲಿ ಕೂಡ ಅವರು ಯಾವ ಜಾಗದಲ್ಲಿ ಎಲ್ಲಿ ವೋಟನ್ನು ಹಾಕಿದ್ದಾರೆ ಕ್ರಮ ಸಂಖ್ಯೆ ಯಾವ ಭಾಗದಲ್ಲಿ ಅವೆಲ್ಲವನ್ನು ಕೂಡ ನಿಮ್ಮ ತಂದೆ ತಾಯಿಯ ಬಳಿ ಕೇಳಿ ಬರೆದಿಟ್ಟುಕೊಳ್ಳಿ..

 ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದದ್ದು

 2002 ರಲ್ಲಿ ನಿಮ್ಮ ಹೆಸರು ಅಂದರೆ ಉದಾಹರಣೆಗೆ ಸುಜಾತ ಆಗಿರುತ್ತದೆ ಈಗ ನಿಮ್ಮ ವೋಟರ್ ಐಡಿನಲ್ಲಿ ಸುಜಾತ ಏನ್ (SUJATHA N ) ಆಗಿರುತ್ತದೆ

  ಇಲ್ಲಿ ನೀವು ಗಮನಿಸಬೇಕಾದದ್ದು 2002ರಲ್ಲಿ ನಿಮ್ಮ ಹೆಸರು ಹೇಗಿರುತ್ತದೋ ಅದೇ ರೀತಿ ಫಾರ್ಮಲ್ಲಿ ಫಿಲ್ ಮಾಡಬೇಕಾಗುತ್ತದೆ ಆದರೆ ಇಲ್ಲಿ ನಿಮಗೆ ಒಂದು ಸಂಶಯ ಬರಬಹುದು ನನ್ನ ನಿಜವಾದ ಹೆಸರು ಸುಜಾತ ಏನ್ ಪರವಾಗಿಲ್ಲ..

 ಎಸ್ ಐ ಆರ್ ರೂಲ್ಸ್ ಪ್ರಕಾರ 2002ರಲ್ಲಿ ನಿಮ್ಮ ಹೆಸರು ಹೇಗಿರುತ್ತೋ ವೋಟರ್ ಲಿಸ್ಟಿನಲ್ಲಿ ಅದೇ ರೀತಿ ನೀವು ಹಾಕಬೇಕಾಗುತ್ತದೆ

 AUGUST ತಿಂಗಳ ನಂತರ ನಿಮಗೆ ಒಂದು

 ಪೋಷ್ಟ್ ಮುಖಾಂತರ ಲೆಟರ್ ಬರಬಹುದು ಅದರಲ್ಲಿ ನಿಮ್ಮ

 ಹೆಸರಿಗೆ ಬದಲಾದ ಕಾರಣವನ್ನು ಹಾಗೂ ಅದಕ್ಕೆ ಬೇಕಾದ ದಾಖಲಾತಿಯನ್ನು ನೀಡಬೇಕಾಗುತ್ತದೆ..


 ಫಾರ್ಮತ್ ಸಿಕ್ಕಿದ ತಕ್ಷಣ ಎರಡು ಅಥವಾ ಮೂರು ಪ್ರತಿಯನ್ನು ನೀವು ಮಾಡಿಟ್ಟುಕೊಳ್ಳಿ ಅಂದರೆ ಜೆರಾಕ್ಸ್ ಅನ್ನು ಮಾಡಿ ಇಟ್ಟುಕೊಳ್ಳಿ ಯಾಕಂದರೆ ಎಲ್ಲಾದರೂ ತಪ್ಪು ಮಾಹಿತಿ ಭರ್ತಿ ಮಾಡಿದರೆ ಮತ್ತೊಂದು ಫಾರ್ಮನ್ನು ಫಿಲ್ ಮಾಡಬಹುದು..



ಜನರಿಗೆ ಮಾಹಿತಿ ತಿಳಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ

 Support us .... 

ಸಂಪಾದಕಿ 

Yasmeen 

moodabidri 

Shahidsha11@gmail.com 




 




Comments

Popular posts from this blog

ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ

 ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ  ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ.. ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ.. ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ. ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ.. ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ  ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ . ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮ...

ಗಂಡ-ಹೆಂಡತಿಯ ಬಾಂಧವ್ಯ ಹೇಗಿರಬೇಕು? | ಸುಖೀ ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆಗಳು

 ಗಂಡ-ಹೆಂಡತಿಯ ಬಾಂಧವ್ಯ.   ಹೇಗಿರಬೇಕು? | ಸುಖೀ ದಾಂಪತ್ಯ.    ಜೀವನಕ್ಕೆ ಅಮೂಲ್ಯ ಸಲಹೆಗಳು ಗಂಡ ಹೆಂಡತಿ ಜಗಳ ನಮ್ಮ ಹಿರಿಯರು ಹೇಳಿದ ಹಾಗೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಆದರೆ ಈಗ ಗಂಡ ಹೆಂಡತಿ ಜಗಳ ವಿಚ್ಛೇದನ ಸಿಗುವ ತನಕ  ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಒಂದು ಸಣ್ಣ ಗಾದೆ ಮಾತು ಎಷ್ಟೊಂದು ಬದಲಾವಣೆಯನ್ನು ಸೂಚಿಸುತ್ತದೆ   ಇಸ್ಲಾಂ ಧಾರ್ಮಿಕದಲ್ಲಿ  ಉಲ್ಲೇಖವಾದ ಒಂದು ಮಾತಿದೆ  ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಾಗ ಅವರ ಕಣ್ಣಿನಲ್ಲಿ  ಅವರ ಪ್ರತಿಬಿಂಬ ಕಾಣಬೇಕು ಅಂದರೆ ಒಬ್ಬರಿಗೊಬ್ಬರು ಮಾತನಾಡುವಾಗ    ಮುಖಮುಖಿಯಾಗಿ ಮಾತನಾಡಬೇಕು.   ಇದರಿಂದ ಪ್ರೀತಿ ಹೆಚ್ಚಾಗುತ್ತೆ ಸಂಬಂಧ ಇನ್ನು ಕೂಡ ಗಟ್ಟಿಯಾಗುತ್ತೆ ಆದರೆ ಈಗ  ಮುಖ ನೋಡುವುದು ಬಿಡಿ  ಮಾತನಾಡಲು ಕೂಡ ಸಮಯ ಇರುವುದಿಲ್ಲ   ಯಾಕಂದರೆ ಈಗ ಎಲ್ಲವೂ ಆಧುನಿಕವಾಗಿದೆ ಒಂದೇ ಮನೆಯಲ್ಲಿ ಇದ್ದುಕೊಂಡು ಹೆಂಡತಿಯೊಂದಿಗೆ ಮಾತನಾಡಬೇಕೆಂದರೆ ಮೆಸೇಜ್ ಮುಖಾಂತರ ಸಂದೇಶವನ್ನು ನೀಡುವುದು 🫥  ಎಲ್ಲವೂ ಈಗ ಫೋನ್ ಮುಖಾಂತರ ನಡೆಯುತ್ತಿದೆ..  ನಾನು ಮೊದಲಿಗೆ ಹೇಳಿದ ಹಾಗೆ  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಇದನ್ನು ಹಿರಿಯರು ಪಾಲಿಸುತ್ತಿದ್ದರು ಹಾಗೆ ಅದೇ ರೀತಿ ಕೂಡ ನಡೆಯುತ್ತಿದ್ದರು ಯಾಕೆಂದರೆ ಅಂದಿನ ಕಾಲದಲ್ಲಿ   ಗಂಡ ಹೆಂಡತಿಯೊ...

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು

ಮಾನವನು ಎಷ್ಟೇ ದೊಡ್ಡವನಾಗಿದ್ದರೂ,  ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ , ಮಾಡಿದ ಉಪವಾಸ,  ಹೊರತು ಹಣ,  ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ  ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು  ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ.. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ  . ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು. ನಾವು ಪ್ರತಿ ದಿನ   ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ...