Skip to main content

ಗಂಡ-ಹೆಂಡತಿಯ ಬಾಂಧವ್ಯ ಹೇಗಿರಬೇಕು? | ಸುಖೀ ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆಗಳು


 ಗಂಡ-ಹೆಂಡತಿಯ ಬಾಂಧವ್ಯ.   ಹೇಗಿರಬೇಕು? | ಸುಖೀ ದಾಂಪತ್ಯ.    ಜೀವನಕ್ಕೆ ಅಮೂಲ್ಯ ಸಲಹೆಗಳು



ಗಂಡ ಹೆಂಡತಿ ಜಗಳ ನಮ್ಮ ಹಿರಿಯರು ಹೇಳಿದ ಹಾಗೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಆದರೆ ಈಗ ಗಂಡ ಹೆಂಡತಿ ಜಗಳ ವಿಚ್ಛೇದನ ಸಿಗುವ ತನಕ


 ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಒಂದು ಸಣ್ಣ ಗಾದೆ ಮಾತು ಎಷ್ಟೊಂದು ಬದಲಾವಣೆಯನ್ನು ಸೂಚಿಸುತ್ತದೆ 


 ಇಸ್ಲಾಂ ಧಾರ್ಮಿಕದಲ್ಲಿ  ಉಲ್ಲೇಖವಾದ ಒಂದು ಮಾತಿದೆ

 ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಾಗ ಅವರ ಕಣ್ಣಿನಲ್ಲಿ  ಅವರ ಪ್ರತಿಬಿಂಬ ಕಾಣಬೇಕು ಅಂದರೆ ಒಬ್ಬರಿಗೊಬ್ಬರು ಮಾತನಾಡುವಾಗ    ಮುಖಮುಖಿಯಾಗಿ ಮಾತನಾಡಬೇಕು.   ಇದರಿಂದ ಪ್ರೀತಿ ಹೆಚ್ಚಾಗುತ್ತೆ ಸಂಬಂಧ ಇನ್ನು ಕೂಡ ಗಟ್ಟಿಯಾಗುತ್ತೆ


ಆದರೆ ಈಗ  ಮುಖ ನೋಡುವುದು ಬಿಡಿ  ಮಾತನಾಡಲು ಕೂಡ ಸಮಯ ಇರುವುದಿಲ್ಲ

  ಯಾಕಂದರೆ ಈಗ ಎಲ್ಲವೂ ಆಧುನಿಕವಾಗಿದೆ ಒಂದೇ ಮನೆಯಲ್ಲಿ ಇದ್ದುಕೊಂಡು ಹೆಂಡತಿಯೊಂದಿಗೆ ಮಾತನಾಡಬೇಕೆಂದರೆ ಮೆಸೇಜ್ ಮುಖಾಂತರ ಸಂದೇಶವನ್ನು ನೀಡುವುದು 🫥  ಎಲ್ಲವೂ ಈಗ ಫೋನ್ ಮುಖಾಂತರ ನಡೆಯುತ್ತಿದೆ..


 ನಾನು ಮೊದಲಿಗೆ ಹೇಳಿದ ಹಾಗೆ  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಇದನ್ನು ಹಿರಿಯರು ಪಾಲಿಸುತ್ತಿದ್ದರು ಹಾಗೆ ಅದೇ ರೀತಿ ಕೂಡ ನಡೆಯುತ್ತಿದ್ದರು ಯಾಕೆಂದರೆ ಅಂದಿನ ಕಾಲದಲ್ಲಿ   ಗಂಡ ಹೆಂಡತಿಯೊಂದಿಗೆ ಮಾತು ಬಿಟ್ಟರೆ ರಾತ್ರಿ ಉನ್ನಲಿಕ್ಕೆ ಹಿಟ್ಟು ಸಿಗೋದಿಲ್ಲ, ಅದೇ ಹೆಂಡತಿ ಗಂಡನೊಂದಿಗೆ ಮಾತು ಬಿಟ್ಟರೆ ಬೇಯಿಸಿ ಹಾಕಲಿಕ್ಕೆ ಹಿಟ್ಟು ಬೇಕಲ್ಲ ಗಂಡ ತಂದು ಕೊಟ್ಟರೆ ಮಾತ್ರ ತಾನೇ ಹೆಂಡತಿ ಬೇಯಿಸಲು ಸಾಧ್ಯ  ಇದರಿಂದ ಗಂಡ ಹೆಂಡತಿ   ಮಧ್ಯ ಎಷ್ಟೇ ವೈ ಮನಸು ಬಂದರು ರಾತ್ರಿ ಹೊತ್ತಿಗೆ ಸರಿ ಹೋಗುತ್ತಾ ಇದ್ದರು..


 ಆದರೆ ಈಗಿನ ಕಾಲಕ್ಕೆ ಇದು ಸರಿ ಹೋಗೋದಿಲ್ಲ ಯಾಕಂದ್ರೆ ಈಗ  jio mart swiggy zomato  ಇನ್ನಿತರ ಹಲವಾರು ಅಪ್ಲಿಕೇಶನ್ಗಳು ಇವೆ ಈ ಕಾರಣಕ್ಕೆ ಯಾವ ಭಯ ಕೂಡ ಇವರಲ್ಲಿ ಇರೋದಿಲ್ಲ  ಹೆಂಡತಿಯೇ ಮಾಡಿ ಹಾಕಬೇಕು ಅಥವ ಗಂಡನೇ ತಂದು ಕೊಡಬೇಕಂತ ಏನು ಇಲ್ಲ ಎಲ್ಲವೂ ಈ ಅಪ್ಲಿಕೇಶನಗಳು ಪೂರೈಸುತ್ತಿದೆ...


 ಇಂಥ ಒಂದು ಕಾರಣಗಳಿಂದ ಗಂಡ ಹೆಂಡತಿ ಮಧ್ಯ  ಜಗಳ ಆದರೆ ಸಣ್ಣ ಪುಟ್ಟ ವೈ ಮನಸು ಬಂದರೆ ಅವರಿಬ್ಬರು ಒಂದಾಗ್ಲಿಕ್ಕೆ ಅಷ್ಟು ಬೇಗ ಸಾಧ್ಯ ಆಗುವುದಿಲ್ಲ..


 ದಯವಿಟ್ಟು ಈ  ಫೋನ್ ಆಗಿರಬಹುದು ಅಥವಾ ಮನೆಯಲ್ಲಿ ಮನೋರಂಜನೆಕ್ಕಾಗಿ ಇಟ್ಟ  t.v ಆಗಿರಬಹುದು  ಇವನ್ನೆಲ್ಲ ಮಿತಿಯಾಗಿ ಬಳಸುವುದು ಉತ್ತಮ ನಿಮ್ಮ ಕೌಟುಂಬಿಕ  ಜೀವನಕ್ಕೆ ಏಟಾಗುವ ರೀತಿ ಇದನ್ನು ಬಳಸಬೇಡಿ

..


 ಗಂಡ ಮನೆಗೆ ಬಂದ ತಕ್ಷಣ ಸ್ವಲ್ಪ ಹೆಂಡತಿಯರು ನಗು ಮುಖದಿಂದ ಸ್ವಾಗತಿಸಿ  ಬಂದ ತಕ್ಷಣ ನಿಮಗಾದ ತೊಂದರೆಗಳು ನಿಮ್ಮ ಒಂದು ನೋವುಗಳು ಇದನೆಲ್ಲ ಹೇಳಿಕೆ ಹೋಗಲೇಬೇಡಿ

 ಸ್ವಲ್ಪ ಹೊತ್ತು ಸುಧಾರಿಸಿದ ನಂತರ ಈ ದಿನ ಏನಾಯ್ತು? ಎಲ್ಲವನ್ನು ಇಬ್ರು ಹಂಚಿಕೊಳ್ಳಿ  ಆಗ ನಿಮ್ಮ ಬಳಿ ಯಾವುದೇ ರೀತಿಯ ಮುಚ್ಚು ಮರೆ ಇರೋದಿಲ್ಲ ಎಲ್ಲವು ಸ್ಪಷ್ಟವಾಗಿ ಕಾಣುತ್ತದೆ ..

 ನಿಮ್ಮ ಕಷ್ಟ ಸುಖ ನೋವು ಇವೆಲ್ಲವೂ ನಿಮ್ಮಿಬ್ಬರ ಮಧ್ಯೆ ಇದ್ರೆ ತುಂಬಾನೇ ಚಂದಾ ಅದನ್ನು ನೀವೇ ಕೂತು ಬಗೆಹರಿಸಿದರೆ ಇನ್ನೂ ಸುಂದರವಾಗಿರುತ್ತೆ ಸಂಸಾರ.. ಯಾವತ್ತೂ ಒಬ್ಬರನ್ನು ಒಬ್ಬರು ಬಿಟ್ಟುಕೊಟ್ಟು ಮಾತನಾಡಬೇಡಿ ..


 ಯಾಕಂದ್ರೆ ಗಂಡ ಹೆಂಡತಿ ಜಗಳ ವಿಚ್ಛೇದನೆ ಆಗೋ ತನಕ ಮಾಡುವುದೇ ಇಂತಹ ಅಕ್ಕಪಕ್ಕದ ನಿಮ್ಮ ಸ್ನೇಹಿತರು ನಿಮ್ಮ ಕುಟುಂಬದವರು ನೆನಪಿರಲಿ

 

 ಈ ಮಾತುಗಳು ನಿಮಗೆ  ಸತ್ಯವೆನಿಸಿದರೆ ನಿಮ್ಮ ಅನಿಸಿಕೆಗಳು ಕಮೆಂಟ್ ಮೂಕಾಂತರ ತಿಳಿಸಿ


ಸಂಪಾದಕಿ: 
Yasmeen riyaz 


Follow me 
Youtube: yasmeenriyaa
https://www.youtube.com/@Yasmeenriyaa
Instagram: yasmeenriyaz 
WhatsApp:yachuriya 
Follow the Yachuriya channel on WhatsApp:
 https://whatsapp.com/channel/0029VbCy685CHDye2rvAbs3t

Comments

Popular posts from this blog

ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ

 ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ  ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ.. ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ.. ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ. ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ.. ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ  ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ . ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮ...

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು

ಮಾನವನು ಎಷ್ಟೇ ದೊಡ್ಡವನಾಗಿದ್ದರೂ,  ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ , ಮಾಡಿದ ಉಪವಾಸ,  ಹೊರತು ಹಣ,  ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ  ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು  ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ.. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ  . ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು. ನಾವು ಪ್ರತಿ ದಿನ   ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ...